Good Friday, 15/04/2022

On #GoodFriday, let the sacrifice of Jesus Christ restore love, compassion and peace in our lives.
 
ಗುಡ್ ಫ್ರೈಡೆ ದಿನದಂದು ಯೇಸು ಕ್ರಿಸ್ತನ ಬಲಿದಾನ ನೆನೆದು ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ, ವಾತ್ಸಲ್ಯ ಮತ್ತು ಕರುಣೆ ತುಂಬಲೆಂದು ಆಶಿಸೋಣ.
 
 
img
 

Demand for KS Eshwarappa's arrest, 15/04/2022

ಬಿಜೆಪಿ ನಾಯಕ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಮೇಲೆ ಲಂಚ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪ್ರಕರಣದಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಸಾಲದು. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಿ ತನಿಖೆ ಆರಂಭಿಸಬೇಕು. ಇದೊಂದು ಸಾಧಾರಣ ವಿಚಾರವಲ್ಲ. ಜನತೆಗೆ ಸರ್ಕಾರ ಹಾಗೂ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಬುಡಮೇಲು ಮಾಡುವ ಪರಿಸ್ಥಿತಿ ಇದೆ. ಸರ್ಕಾರ ನಡೆಸುವವರೆ ಈ ಪರಿಯ ಭ್ರಷ್ಟಾಚಾರದಲ್ಲಿ ತೊಡಗಿರುವುದು ರಾಜ್ಯವೇ ತಲೆ ತಗ್ಗಿಸುವಂತಹ ವಿಚಾರ.

 #KSEshwarappa #Contractors #40% #Corruption

 
 

Happy Kodava New Year, 14/04/2022

ಕೊಡವರ ಸಾಂಪ್ರದಾಯಿಕ ಹೊಸ ವರ್ಷ ಆಚರಣೆ ಎಡಮ್ಯಾರ್ ಒಂದ್ ದಿನದ ಶುಭಾಶಯಗಳು. ತಲತಲಾಂತರದಿಂದ ಕೊಡಗಿನಲ್ಲಿ ನಡೆದುಬಂದಿರುವ ಈ ವಿಶಿಷ್ಟ ಆಚರಣೆ ಸಾಂಪ್ರದಾಯಿಕ ಕೊಡವ ಕ್ಯಾಲೆಂಡರ್‌ನ ಪ್ರಕಾರ ವರ್ಷದ ಮೊದಲ ದಿನ. ಮುಂಬರುವ ವರ್ಷ ಸಕಲ ಜನಕ್ಕೂ ಹೊಸ ಭರವಸೆ, ಸಂತೋಷ ಮತ್ತು ಗೆಲುವನ್ನು ತುಂಬಲೆಂದು ಹಾರೈಸುತ್ತೇನೆ
 
My best wishes to everyone on the occasion of the traditional new year celebrations of Kodavas, Edamyar Ond. I wish the new year brings happiness, success and new hope to everyone.
 
#Kodagu #Coorg #NewYear #EdamyarOnd
 
 
img
img
 

Ambedkar Jayanti wishes, 14/04/2022

ಮಹಾನ್ ಮಾನವತಾವಾದಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಜನಗಳ ಕೈಗೆ ಆಯುಧಗಳನ್ನು ಕೊಡಲಿಲ್ಲ, ಬದಲಿಗೆ ಸಂವಿಧಾನವನ್ನೇ ಆಯುಧವನ್ನಾಗಿ ಕೊಟ್ಟಿದ್ದಾರೆ. ದೇಶದ, ಅದರ ಕೋಟ್ಯಂತರ ಜನರ ಬದುಕನ್ನು ಇಂದಿಗೂ ತಿದ್ದುತ್ತಿರುವ ಮಹಾ ಚೇತನದ ಜನುಮ ದಿನದಂದು ನನ್ನ ಗೌರವಪೂರ್ಣ ನಮನಗಳು. "Be Educated, Be Organised and Be Agitated" Dr. Babasaheb BR Ambedkar's words are a mantra for the downtrodden anywhere in the world in any age. On his birth anniversary, my humble tributes to the man who continues to drive the destiny of millions. #JaiBhim #AmbedkarJayanti
 
 
img
 

Visit to home of tiger attack victim, 12/04/2022

ಹುಲಿ ದಾಳಿಯಿಂದ ಮೃತಪಟ್ಟ ಕೂಲಿ ಕಾರ್ಮಿಕ ಗಣೇಶ್ (ಪುಟ್ಟ) ಅವರ ಮನೆಗೆ ಭೇಟಿ ಕೊಟ್ಟು ಅವರ ಕುಟುಂಬಸ್ತರಿಗೆ ಸಾಂತ್ವನ ಕೋರಿದೆ. ಸರ್ಕಾರ ಇವರ ಕುಟುಂಬಕ್ಕೆ ಘೋಷಿಸಿರುವ ಪರಿಹಾರ ಆದಷ್ಟು ಶೀಘ್ರದಲ್ಲೇ ಒದಗಿಸುವ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನನ್ನ ವೈಯಕ್ತಿಕ ಪರಿಹಾರದ ಚೆಕ್ ಗಣೇಶ್ ಅವರ ಕುಟುಂಬಕ್ಕೆ ಹಸ್ತಾಂತರಿಸಿದೆ. ಸ್ಥಳದಲ್ಲೇ ಅರಣ್ಯ ಇಲಾಖೆಯ ಮುಖ್ಯಸ್ಥರಾದ ಪಿ.ಸಿ.ಸಿ.ಎಫ್ ವಿಜಯ್ ಕುಮಾರ್ ಗೋಗಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆಗೆ ಕಾರಣವಾದ ಹುಲಿಯನ್ನು ಹಿಡಿದು ಜನರ ಆತಂಕ ನಿವಾರಣೆ ಮಾಡಲು ಒತ್ತಾಯಿಸಿ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದೆ. ಡಿ.ಎಫ್.ಓ ಚಕ್ರಪಾಣಿ ಮತ್ತು ಎ.ಟಿ.ಪೂವಯ್ಯ ಅವರ ಜೊತೆ ಕೂಡ ವಿಷಯಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ಮಾಡಿದೆ. ಬಿಟ್ಟಂಗಾಲ ಸಮೀಪ ಕಂಡಂಗಾಲ ಗ್ರಾಮದಲ್ಲಿ ನಡೆದ ಈ ಅಹಿತಕರ ಘಟನೆ ಕೇವಲ ಒಂದು ಪ್ರತ್ಯೇಕ ಘಟನೆ ಎಂದು ನೋಡದೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷದ ಭಾಗವಾಗಿ ನೋಡಿ ಪೂರ್ಣಪ್ರಮಾಣದ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಗಣೇಶ್ ಅವರ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.

#Coorg #Kodagu #Tiger #AnimalConflict #TigerAttack #Madikeri #Virajpet #Ponnampet #Kandangala #Bittangala

 

img